ಪ್ರಿಯ ಸೋದರಿ,
ನಮ್ಮ ಪರಿಚಯ ಪಕ್ವವಾಗುತ್ತಿರುವ ಸಮಯದಲ್ಲಿ ದಿಢೀರನೆ ಹೀಗೆ ನಮ್ಮ ಸ್ನೇಹ ಭಾಂಧವ್ಯ
ಅಂತ್ಯಗೊಳ್ಳಬಹುದೆಂಬ ಕಲ್ಪನೇ ನನಗಿರಲಿಲ್ಲ.
ನೀವು ದೇವರು ಕೊಟ್ಟ ಸೋದರಿ ಎಂದು ಸಂತಸಗೊಂಡಿದ್ದೆ.
ಮೊನ್ನೆ ನೀವು ದೀಪಾವಳಿಗೆ ಹೊರಡುವ ಹಿಂದಿನ ದಿನ ನಿಮ್ಮನ್ನು ಹಬ್ಬಕ್ಕೆ ಬರಲು ಆಹ್ವಾನಿಸಿದ್ದಾಗ
ಕೂಡನೀವು ನನ್ನೊಂದಿಗೆ ಸಹಜವಾಗಿದ್ದಿರಿ....
ಇಂಟರ್ನೆಟ್ನಲ್ಲಿ ಪರಿಚಯವಾದಾಗಿನಿಂದ ಒಡಹುಟ್ಟಿದ ಸೋದರಿಯಂತೆ ನಿಮ್ಮನ್ನು ಭಾವಿಸಿದ್ದೆ. ದಿನ,
ಎರಡು ದಿನಗಳಿಗೊಮ್ಮೆ ನಿಮ್ಮ ವಿಷಯ
ತಿಳಿಯದಿದ್ದರೆ ಚಡಪಡಿಕೆ ಶುರುವಾಗುತ್ತಿತ್ತು.
ಆದರೆ ಇದು ಒಮ್ಮುಖ ಎಂಬ ಭಾವನೆಯ ಸುಳಿವೂ ನನಗೆ ತಿಳಿಯದಂತೆ ವ್ಯವಹರಿಸುತ್ತೀದ್ದಿರೆಂದು
ತಿಳಿಯುವ ವೇಳೆಗೆ ತುಂಬಾ ಕಾಲ ಮಿಂಚಿತ್ತು.
ನನ್ನ ಸಂದೇಶಗಳಿಗೆ ಪ್ರತ್ಯ್ತುತ್ತರ ಇಲ್ಲದೇ ಹೋದಾಗ ಕಳವಳಗೊಂಡುಕರೆ ಮಾಡಿದಾಗ ನೀವು ಸ್ವೀಕರಿಸಲಿಲ್ಲ,...
ಇದು ಮನಸ್ಸಿಗೆ ತುಂಬಾ ಆಘಾತವುಂಟು ಮಾಡಿತು.
ಮರಳಿ ಮರುದಿನ ಸಂಜೆ ಕರೆ ಮಾಡಿದಾಗ ಆಮೇಲೆ ಕರೆ ಮಾಡುವೆನೆಂದು ತಿಳಿಸಿ ಸ್ವಲ್ಪ ಹೊತ್ತಿನಲ್ಲಿ
ಇಂಟರ್ನೆಟ್ಗೆ ಬರಲು ತಿಳಿಸಿದಿರಿ. ಅದರಂತೆ ಲಾಗಿನ್ ಆದಾಗ,
ಏನು ಎತ್ತ ಎಂಬ ವಿವರಣೆ ಇಲ್ಲದೇ ಬರೀ ನನ್ನ ಮರೆತು ಬಿಡು ಎಂಬ ಪಲ್ಲವಿ-ಅನುಪಲ್ಲವಿಯೊಡನೆ
ನಮ್ಮ ಪವಿತ್ರ ಸಂಬಂಧ ಕೊನೆಗೊಳಿಸುವ ಮಾತಿನೊಂದಿಗೆ ಸಂಪರ್ಕ
ಕಡಿತಗೊಳಿಸಿದಿರಿ.
ಸುಮಾರು ಒಂದೂವರೆ ವರ್ಷದ ಸ್ನೇಹ , ಸೋದರ ಸಂಬಂಧ ಈ ರೀತಿ ಪರ್ಯವಸನಗೊಳ್ಳುವದೆಂಬ
ಕಲ್ಪನೆ ನನಗೆ ಬರಲಿಲ್ಲ.
ನಮ್ಮ ಪರಿಚಯದಲ್ಲಿ ನಾನೆಂದೂ ಸೀಮಾರೇಖೆ ಮೀರಿ ನೆಡೆದುಕೊಂಡಿರಲಿಲ್ಲ, ಅಲ್ಲವೇ?
ನನ್ನಂಥ ಭಾವನಾ ಜೀವಿಗಳು ಇಂದಿನ ಞಟಿ -ಬಿಟಿ ಯುಗಕ್ಕೆ ಅಪ್ರಸ್ತುತರೆಂದು ನಿರೂಪಿಸುವ ನಿಮ್ಮ ಪ್ರಯತ್ನ
ಯಶಸ್ವಿಯಾದಂತೆ ತೋರುತ್ತಿದೆ...
ನನ್ನ ಯಾವ ತಪ್ಪಿಗೆ ನೀವು ನಮ್ಮ ಸಂಬಂಧ ಕಡಿದುಕೊಳ್ಳುವ ಮಾತಾಡುತ್ತಿರುವಿರೆಂದು ನನಗೆ ತಿಳಿಯುತ್ತಿಲ್ಲ.......
ಭಾರತದಲ್ಲಿನ ಪುರಾತನ ನಂಬಿಕೆ ಎಂದರೆ ಪುನರ್ಜನ್ಮದ್ದು, ನಿಮಗೆ ಇದು ಹಾಸ್ಯಾಸ್ಪದ ಎನ್ನಿಸಿದರೂ
ಚಿಂತೆಯಿಲ್ಲ, ನೀವು ಮುಂದಿನ ಜನ್ಮದಲ್ಲಾದರೂ ನನ್ನ ತಂಗಿಯಾಗಿಹುಟ್ಟಿ ಬರಲಿ ಎಂದು ಆಶಿಸುತ್ತೇನೆ.
ಆ ಸ್ಥಾನ ನಿಮಗಾಗಿ ನನ್ನ ಮನದಲ್ಲಿ ಯಾವಾಗಲೂ ಇರುತ್ತದೆ.
ಅಗಲುವಿಕೆಯ ದು:ಖ ಮನದಲ್ಲಿ ಮಡುಗಟ್ಟಿದೆಯಾದರೂ ನೀವು ಮರಳಿ ಬರುವಿರೆಂಬ
ನಿರೀಕ್ಷೆಯಲ್ಲಿರುವ,
ನಿಮ್ಮೊಲುಮೆಯ ಅಣ್ಣ.. ( ನಿಮ್ಮ ಕರೆಯ ನಿರೀಕ್ಷೆಯಲ್ಲಿ..)
ಜಿತೇಂದ್ರ